ಐಎಂಎಯಿoದ ಪೊಲೀಸರಿಗೆ ವೈದ್ಯಕೀಯ ತುರ್ತು ನಿರ್ವಹಣೆ ತರಬೇತಿ


ಹೃದಯ ಸ್ತಂಭನ, ವಿಷಪ್ರಾಶನ, ಸುಟ್ಟಗಾಯ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿ ಅವರ ಜೀವವನ್ನು ಉಳಿಸುವ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಕರ‍್ಯಾಗಾರವನ್ನು ಭಾರತೀಯ ವೈದ್ಯಕೀಯ ಸಂಘದ ಬೆಳಗಾವಿ ಘಟಕವು ಇತ್ತೀಚೆಗೆ ಏರ್ಪಡಿಸಿತ್ತು.
ವೈದ್ಯಕೀಯ ತುರ್ತುಪರಿಸ್ಥಿಯಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ಅವರನ್ನು ಪ್ರಾಣಾಪಾಯದಿಂದ ಪಾರುಮಾಡುವ ಹಾಗೂ ಅದನ್ನು ಹೇಗೆ ನಿಭಾಯಿಸಬೇಕೆನ್ನುವ ತರಬೇತಿಯನ್ನು ಪ್ರಾತ್ಯಕ್ಷತೆ ಮೂಲಕ ತಿಳಿಸಿಕೊಡಲಾಯಿತು. ಬೆಳಗಾವಿಯ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡವು ಪ್ರಾತ್ಯಕ್ಷಿತೆಯ ಅನುಕರಣೆ ಮಾಡಲಾಯಿತು. ಹೃದಂiÀi. ಸ್ತಂಭನ, ಉಸಿರಾಟದ ತೊಂದರೆ ಸೇರಿದಂತೆ ಜೀವಕ್ಕೆ ಹಾನಿಯುಂಟಾಗುವ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕೆನ್ನುವ ಅಗತ್ಯವಿರುವ ಜ್ಞಾನ, ತಂತ್ರದ ಸೂಕ್ಷ್ಮ ಅಂಶಗಳು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲಾಯಿತು.

1671164101715


ಈ ಸಂದರ್ಭದಲ್ಲಿ ಸುಮಾರು 70ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಅವರೆಲ್ಲರೂ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವವರಾಗಿದ್ದಾರೆ.
ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯ ಡಾ.ಸಂತೋಷ್ ಕರ್ಮಸಿ, ಡಾ. ಬಸವರಾಜ್ ಕುಡಸೋಮಣ್ಣನವರ್ ಅವರು ಬೇಸಿಕ್ ಲೈಫ್ ಸಪೋರ್ಟ ಕುರಿತು, ಡಾ ನೇಹಾ ಕುಲಕರ್ಣಿ ಅವರು ಹೃದಯ ಸ್ತಂಬನವಾದಾಗ ಅನುಸರಿಸುವ ತಂತ್ರ, ಡಾ. ಉಜ್ವಲಾ ಹಲಗೇಕರ ಅವರು, ವಿಷಪ್ರಾಶಣ ಹಾಗೂ ಹಾವು ಕಡಿತದ ಸಂದರ್ಭದಲ್ಲಿ ಎಚ್ಚರಿಕೆ ಕ್ರಮ, ಡಾ. ದರ್ಶನ ರಜಪೂತ ಅವರು ಸುಟ್ಟ ಗಾಯಾಳುಗಳ ನಿರ್ವಹಣೆ ಹಾಗೂ ಡಾ. ಹೇಮಂತ ಕೌಜಲಗಿ ಅವರು ರಸ್ತೆ ಅಪಘಾತದಲ್ಲಿನ ಗಾಯಾಳುಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಆಸ್ಪತ್ರೆಗೆ ಸಾಗಿಸುವ ಕುರಿತು ತರಬೇತಿ ನೀಡಿದರು.
ಡಿಸಿಪಿ ರವೀಂದ್ರ ಗಡಾದಿ(ಕಾನೂನು ಮತ್ತು ಸುವ್ಯವಸ್ಥೆ), ಅವರು ಮಾತನಾಡಿ, ಕೆಎಲ್‌ಇ ಆಸ್ಪತ್ರೆ ಹಾಗೂ ಬೆಳಗಾವಿ ವೈದ್ಯರ ತಂಡ, ಐಎಂಎ ಸದಾ ಪೊಲೀಸರ ಕರ‍್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರ ಆರೋಗ್ಯ ಕಾಪಾಡಲು ಹಾಗೂ ಅಗತ್ಯ ಚಿಕಿತ್ಸೆ ನೀಡಲು ಸದಾ ಸನ್ನದ್ದವಾಗಿರುತ್ತಾರೆ. ಅವರಿಗೆ ಅಭಿನಂದನೆಗಳು ಎಂದ ಅವರು ಈ ತರಬೇತಿಯು ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಐಎಂಎ ಖಜಾಂಚಿ ಡಾ. ಬಸವರಾಜ ಬಿಜ್ಜರಗಿ, ಡಾ.ನಮ್ರತಾ ಕುಟ್ರೆ, ಡಾ.ಸತೀಶ ಬಾಗೇವಾಡಿ, ಡಾ.ಸ್ಮಿತಾ ಕೌಜಲಗಿ, ಡಾ.ಮಿಲಿಂದ ಹಲಗೇಕರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಇಡಬೇಕಾದ ತುರ್ತು ಸಾಮಗ್ರಿಗಳ ಪಟ್ಟಿಯನ್ನು ಹಸ್ತಾಂತರಿಸಿದರು. ಎಸಿಪಿ ಎನ್.ವಿ.ಬರಮಣಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಡಾ ರಾಜಶ್ರೀ ಆನಿಗೋಳ ಅತಿಥಿಗಳನ್ನು ಪರಿಚಯಿಸಿದರೆ, ಐಎಂಎ ಅಧ್ಯಕ್ಷೆ ಡಾ ಸ್ವಪ್ನಾ ಮಹಾಜನ್ ಮತ್ತು ಕಾರ್ಯದರ್ಶಿ ಡಾ ಹೇಮಂತ್ ಕೌಜಲಗಿ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ನಗರ ಸಿಸಿಬಿಯ ಪೊಲೀಸ್ ನಿರೀಕ್ಷಕ ನಿಂಗನಗೌಡ ಪಾಟೀಲ ಕಾರ್ಯಕ್ರಮವನ್ನು ಸಂಯೋಜಿಸಿದರು.

Popular Doctors

Related Articles