ನವೋದ್ಯಮದಲ್ಲಿ ವೈದ್ಯಕೀಯ ಉಪಕರಣಗಳ ತಯಾರಿಕೆ

ಶ್ರವಣ ಯಂತ್ರ ಪ್ರದರ್ಶಿಸುತ್ತಿರುವ ರಮ್ಯಾ

ಆರಾಯಂತ್ರ ಪ್ರದರ್ಶಿಸುತ್ತಿರುವ ಡಾ.ಕಿರಣ ಕಂಠಿ

ನಗರೀಕರಣ ಮತ್ತು ಆಧುನಿಕತೆಯಲ್ಲಿ ವೈದ್ಯವಿಜ್ಞಾನ ಸಾಕಷ್ಟು ಅಭಿವೃದ್ದಿ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಸಂಶೋಧನೆಯ ಪ್ರತಿಫಲವು ಸಾಮಾನ್ಯ ಜನರಿಗೆ ಲಭಿಸುತ್ತಿದೆ. ಆರೋಗ್ಯವೇ ಭಾಗ್ಯ ಎನ್ನುವಂತೆ ವೈದ್ಯಕೀಯ ಕ್ಷೇತ್ರವು ಅತೀ ಮಹತ್ವ ಪಡೆದುಕೊಳ್ಳುತ್ತಿದೆ.ಆದರೆ ಆಧುನಿಕತೆಯಲ್ಲಿ ವೈದ್ಯಕೀಯ ವೆಚ್ಚವೂ ಹೆಚ್ಚಾಗಿದೆ. ಅದಕ್ಕಾಗಿಯೇ ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಜನರಿಗೆ ವೈದ್ಯಕೀಯ ಸೌಲಭ್ಯ ಲಭಿಸಬೇಕೆಂದು ಬಯಸಿದ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನ ಸ್ಯಾಂಡ್‌ ಬಾಕ್ಸ್‌ನಲ್ಲಿ ಎರಡು ನವೋದ್ಯಮಗಳು ವೈದ್ಯಕೀಯ ಉಪಕರಣಗಳ ಸಂಶೋಧನೆ ಮತ್ತು ತಯಾರಿಕೆಗೆ ಮುಂದಾಗಿವೆ.

ದೇಹದ ಎಲ್ಲ ಅಂಗಾಂಗಗಳಂತೆ ಕಿವಿ (ಶ್ರವಣ) ಕೂಡ ಬಹುಮುಖ್ಯ ಅಂಗ. ಆದರೆ ಶ್ರವಣ ದೋಷದಿಂದ ಬಳಲುತ್ತಿರುವವರ ಪಾಡು ಹೇಳತೀರದು. ಅಲ್ಲದೇ ದೂರದ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ತೆರಳಿ ತಪಾಸಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಆದರೆ ಚಿಕಿತ್ಸಾ ವೆಚ್ಚವೂ ಅತ್ಯಧಿಕ. ಇದರಿಂದಾಗಿ ಬಹಳಷ್ಟು ಜನರು ಚಿಕಿತ್ಸೆ ತೆಗೆದುಕೊಳ್ಳದೇ ನಿರ್ಲಕ್ಷಿಸುತ್ತಾರೆ. ಇದಕ್ಕೊಂದು ಪರಿಹಾರ ಕಲ್ಪಿಸುವ ಉದ್ದೇಶದಿಂದ ನವೋದ್ಯಮದಡಿ ನಾಟಿಲಸ್‌ ಹಿಯರಿಂಗ್‌ ಸಲೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಆರಂಭಿಸಲಾಗಿದ್ದು, ಶ್ರವಣದೋಷ ನಿವಾರಣೆಗೆ ಯಂತ್ರವೊಂದನ್ನು ಸಂಶೋಧಿಸಲಾಗಿದೆ. ಇದರ ಮೂಲಕ ಕಡಿಮೆ ವೆಚ್ಚದಲ್ಲಿ ಸರಳವಾಗಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಕಂಪನಿಯ ಸಹ ಸಂಸ್ಥಾಪಕಿ ರಮ್ಯಾ.

startup

ವಯಸ್ಸಾದಂತೆ ಶ್ರವಣ ದೋಷ ಸಾಮಾನ್ಯ. ಆದರೆ ಹಿರಿಯರು ಚಿಕಿತ್ಸೆಗೆ ಮುಂದಾಗುವದೇ ಇಲ್ಲ. ತಪಾಸಣೆಯ ಉಪಕರಣಗಳು ದುಬಾರಿಯಾಗಿರುವ ಕಾರಣ ಬಹಳಷ್ಟು ತಾಲ್ಲೂಕು ಕೇಂದ್ರಗಳಲ್ಲಿಯೂ ತಜ್ಞ ವೈದ್ಯರು ಸಿಗುವುದಿಲ್ಲ. ದುಬಾರಿಯಾಗಿರುವ ಶ್ರವಣದೋಷ ಪತ್ತೆಯ ಯಂತ್ರವನ್ನು ಕಡಿಮೆ ದರಕ್ಕೆ ಒದಗಿಸಲು ಸುಲಭ ಉಪಕರಣವೊಂದನ್ನು ಮೂವರು ನವೋದ್ಯಮಿಗಳು ಸೇರಿ ಸಂಶೋಧಿಸಿದ್ದಾರೆ

ಶ್ರವಣದೋಷ ಪತ್ತೆ ಡಿವೈಸ್‌ ಕಂಡು ಹಿಡಿಯಲು ಒಂದೂವರೆ ವರ್ಷ ಶ್ರಮಪಟ್ಟಿದ್ದಾರೆ. ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಸಾಮಾನ್ಯ ಶ್ರವಣದೋಷ ಉಪಕರಣಗಳ ವೆಚ್ಚ ಸುಮಾರು10 ಲಕ್ಷದವರೆಗೆ ಆಗುತ್ತದೆ. ಆದರೆ, ಯಂತ್ರ ಕಡಿಮೆ ಬೆಲೆಗೆ ಲಭಿಸುತ್ತದೆ. ರೋಗಿಗಳ ಎಲ್ಲ ಮಾಹಿತಿಯನ್ನು 
ಡಿಜಿಟಲ್‌ ಆಗಿ ಸಂಗ್ರಹಿಸಲಿಕ್ಕೂ ಇದರಲ್ಲಿ ಅವಕಾಶವಿದೆ. ಹಾಗಾಗಿ ಹಿಂದೆ ತೋರಿಸಿದ ದಾಖಲೆಗಳಿಗಾಗಿ ಹುಡುಕಾಡಬೇಕಿಲ್ಲ.

ಸ್ಯಾಂಡ್‌ ಬಾಕ್ಸ್‌ನಲ್ಲಿ ವೈದ್ಯಕೀಯ ಉತ್ಪನ್ನಗಳ ತಯಾರಿಕೆಗಾಗಿ ಡಾ.ಕಿರಣ ಕಂಠಿ ಅವರು, ಲೈಫ್‌ಟ್ರಾನ್ಸ್ ಇನ್ನೊ ಇಕ್ವಿಪ್‌ಮೆಂಟ್ಸ್ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಇನ್ನೊಂದು ನವೋದ್ಯಮ ಆರಂಭಿಸಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ಬೇಕಾದಂತಹ ಉಪಕರಣಗಳನ್ನು ತಯಾರಿಸುವಲ್ಲಿ ಕೆಲವೊಮ್ಮೆ ಕಂಪನಿಗಳು ಹಿಂದೆ ಬೀಳುತ್ತವೆ. ಕೆಲವೊಂದು ಸೌಲಭ್ಯಗಳು ಉಪಕರಣಗಳಲ್ಲಿ ಇರುವುದಿಲ್ಲ. ವೈದ್ಯರಾದ ನಾವೇ ಯಂತ್ರಗಳ ತಯಾರಿಕೆಗೆ ಮುಂದಾದರೆ ಎಲ್ಲ ಕೊರತೆಗಳನ್ನು ನೀಗಿಸಬಹುದು. ನಿಟ್ಟಿನಲ್ಲಿಯೇ ಕಂಪನಿ ಆರಂಭಿಸಿ ಉಪಕರಣವೊಂದನ್ನು ಸಿದ್ಧಪಡಿಸಿದ್ದೇವೆಎನ್ನುತ್ತಾರೆ ಡಾ.ಕಂಠಿ.v

ಶಿಶುಗಳಲ್ಲಿನ ಕಾಮಾಲೆಗೆಆರಾಪರಿಹಾರ

ನವಜಾತ ಶಿಶುಗಳಲ್ಲಿ ಕಾಮಾಲೆ (ಜಾಂಡೀಸ್) ಸಹಜ. ಆಗ ಶಿಶುಗಳನ್ನು ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕ(ಎನ್ಐಸಿಯು)ದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ತೀವ್ರ ನಿಗಾ ಘಟಕಗಳು ಎಲ್ಲ ಆಸ್ಪತ್ರೆಗಳಲ್ಲಿ ಇರುವುದಿಲ್ಲ. ಅಲ್ಲದೇ ವೆಚ್ಚದಾಯಕ. ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಬೇಕಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿಆರಾಎಂಬ ಉಪಕರಣ ಸಂಶೋಧಿಸಲಾಗಿದೆ. ‘ಇದರಿಂದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ತಾಯಿ ಬೆಡ್ಪಕ್ಕದಲ್ಲಿಯೇ ಇದನ್ನು ಅಳವಡಿಸಬಹುದಾಗಿದೆ. ಇದರಿಂದ ತಾಯಿಮಗುವನ್ನು ಬೇರ್ಪಡಿಸಬೇಕಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದೆಎನ್ನುತ್ತಾರೆ ಅವರು.

startup1

ನವಜಾತ ಶಿಶುವಿನಲ್ಲಿ ಕಾಮಾಲೆ ಕಾಣಿಸಿಕೊಂಡಾಗ ಫೋಟೊಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ಯಂತ್ರ ಉಪಯುಕ್ತವಾಗಿದೆ. ವಿದ್ಯುತ್ಷಾಕ್ಹೊಡೆಯದಂತೆ, ಮಕ್ಕಳಿಗೆ ಎಲ್ಲಿಯೂ ಚುಚ್ಚದಂತೆ ವಿನ್ಯಾಸ ಮಾಡಲಾಗಿದೆ. ಈಗಾಗಲೇ ಹಲವಾರು ಆಸ್ಪತ್ರೆಗಳಿಗೆ ಪ್ರಾಯೋಗಿಕ ಪರೀಕ್ಷೆಗಾಗಿ ನೀಡಲಾಗಿತ್ತು. ಅವರೆಲ್ಲ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

Popular Doctors

Related Articles