ರಕ್ತದಾನ ಮಹಾದಾನ “ಸುರಕ್ಷಿತ ರಕ್ತ-ಜೀವವನ್ನು ಉಳಿಸುತ್ತದೆ

ರಕ್ತದಾನದ ಜಾಗೃತಿ ಮತ್ತು ರಕ್ತದಾನ ಮಾಡಿದವರಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವದ ಬೇರೆ ಬೇರೆ ರಾಷ್ರಗಳು ಜಾಗೃತಿ ಮೂಡಿಸಿ ರಕ್ತ ದಾನದಿಂದಾಗುವ ಲಾಭಗಳನ್ನು ತಿಳಿಸುತ್ತಿರುತ್ತಾರೆ. ಈ ವರ್ಷ “ಸುರಕ್ಷಿತ ರಕ್ತ-ಜೀವವನ್ನು ಉಳಿಸುತ್ತದೆ.(SAFE BLOOD, SAVES LIVES )ಎಂಬುದು ಈ ವರ್ಷದ ಘೋಷವಾಕ್ಯ. ಕೊರೊನಾ ಮಹಾಮಾರಿಯಿಂದಾದ ಲಾಕ್‍ಡೌನ್ ಸಮಯದಲ್ಲಿ ಜನರು ಹೊರಬರುವುದಂತ ಕ್ಲಿಷ್ಟ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿರುವ ರೋಗಿಗಳು ಮತ್ತು ಅವರ ಸಂಭಂದಿಕರ ಪಾಡು ಹೇಳತೀರದು.

ನಾವು ಜೀವಂತವಿರುವಾಗ ಪದೆ ಪದೆ ನಮ್ಮ ದೇಹದಿಂದ ಕೊಡಬಹುದಾದ ಏಕೈಕ ದಾನವೆಂದರೆ ಅದು ರಕ್ತ ದಾನ. ವಿಜ್ಞಾನದಲ್ಲಿ ನಾವು ಎಷ್ಟೆ ಮುಂದುವರೆದರು ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಾಗುತ್ತಿಲ್ಲಾ. ಇದು ಮಾನವನಿಂದ ಮಾನವನಿಗೆ ಮಾತ್ರ ಕೂಡಬಹುದಾಗಿದೆ. ಜನರಿಗೆ ರಕ್ತ ದಾನ ಮಾಡುವದರ ಬಗ್ಗೆ ತಪ್ಪು ಕಲ್ಪಣೆಗಳಿವೆ. ರಕ್ತ ದಾನದಿಂದ ನಮ್ಮ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ, ನಮ್ಮ ಶಕ್ತಿ ಕುಂದುತ್ತದೆ, ಹೀಗೆ ಅನೇಕ ಗೊಂದಲಗಳನ್ನು ತಮ್ಮ ಮನದಲ್ಲಿ ತುಂಬಿಕೊಂಡಿರುತ್ತಾರೆ. ಅದನ್ನೆಲ್ಲಾ ಹೋಗಲಾಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರಕ್ತ ಭಂಡಾರಗಳು ಜನರಿಗೆ ಅರಿವು ಮುಡಿಸುತ್ತಲೇ ಇವೆ. ಆದರು ಜನರಲ್ಲಿ ರಕ್ತದಾನವೆಂದರೆ ಭಯ ಇನ್ನೂ ಇದೆ. ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವದನ್ನು ಜನರಲ್ಲಿ ಉತ್ತೇಜನ ತುಂಬಬೇಕಾಗಿದೆ.

ಒಂದು ಸಾರಿ ರಕ್ತ ದಾನ ಮಾಡುವದರಿಂದ 4 ಜನರ ಜೀವ ಉಳಿಸುತ್ತದೆ. ರಕ್ತದ ಭಾಗಗಳಾದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲಾಸ್ಮಾ ಮತ್ತು ಕ್ರಾಯೂ ಕಣಗಳನ್ನು ಬೇರ್ಪಡಿಸಿ, ರೋಗಿಗಳ ಅವಶ್ಯಕತೆಯ ಅನುಸಾರವಾಗಿ ರಕ್ತದ ಪರಿಕರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ರಕ್ತದಾನ ಮಾಡುವದರಿಂದ 4 ಜೀವಗಳನ್ನು ಉಳಿಸಬಹುದು.

 

1) ಕೆಂಪು ರಕ್ತ ಕಣಗಳು (Red Blood Cells ) ದೇಹದ ಹಿಮೋಗ್ಲೋಬಿನ್ ಹೆಚ್ಚಿಸುವದರಲ್ಲಿ ಸಹಾಯ ಮಾಡುತ್ತದೆ,

2) ಲ್ಯುಕೋಸೈಟ್ಸಳು ಎಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳು ( White Blood Cells ) ಸಾಂಕ್ರಾಮಿಕ ರೋಗ ಮತ್ತು ದೇಹದಲ್ಲಿ ಪ್ರವೇಶಿಸುವ ಹೊರ ವಸ್ತುಗಳು ವಿರುದ್ಧ ದೇಹವನ್ನು ರಕ್ಷಿಸುವಲ್ಲಿ ತೊಡಗಿರುವ ಪ್ರತಿರಕ್ಷಣಾ ವ್ಯವಸ್ಥೆಯ ಕೋಶಗಳಾಗಿವೆ.

3) ಪ್ಲಾಸ್ಮಾ (Plasma)ಕೋಶಗಳನ್ನು ಪ್ಲಾಸ್ಮಾ ಬಿ ಜೀವಕೋಶಗಳು ಎಂದು ಕರೆಯುತ್ತಾರೆ, ಇದು ಮೂಳೆ ಮಜ್ಜೆಯಲ್ಲಿ ಹುಟ್ಟುವ ಬಿಳಿ ರಕ್ತ ಕಣಗಳು ಮತ್ತು ಪ್ರತಿಜನಕಗಳು ಎಂದು ಕರೆಯಲ್ಪಡುವ ನಿರ್ದಿಷ್ಟ ಪದಾರ್ಥಗಳನ್ನು ಉತ್ಪಾದಿಸಿ, ಪ್ರೋಟೀನಗಳನ್ನು ಸ್ರವಿಸುತ್ತದೆ.

4) ಕ್ರಾಯೂ ( ಅಡಿಥಿo ) ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟಲೆಟಗಳನ್ನು ಬೇರ್ಪಡಿಸಿ ಉಳಿಯುವ ಕಣಗಳೆಂದರೆ ಕ್ರಾಯೂ. ಇದು ರಕ್ತಸ್ರಾವವನ್ನು ತಡೆಗಟ್ಟುವದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ರಕ್ತದಲ್ಲಿ ಸಾಮಾನ್ಯವಾಗಿ ಎ.ಬಿ. ಓ ಮತ್ತು ಎಬಿ ರಕ್ತದ ಗುಂಪುಗಳು, ಹೊಸ ಮಾದರಿಗಳಾದ ಬಾಂಬೆ ರಕ್ತದ ಗುಂಪು, ಎ1 ಹಾಗೂ ಎ1ಬಿ ಹೀಗೆ ಕಂಡುಬಂದಿವೆ. ಈ ವಿರಳ ಗುಂಪಿನ ರಕ್ತದವರು ನಮ್ಮ ದೇಶದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿದ್ದು ಇವರು ಹೆಸರುಗಳು ದೆಹಲಿಯ ರಾಷ್ಟ್ರೀಯ ರಕ್ತದಾನಿಗಳ ಪರಿಷತ್ತಿನÀಲ್ಲಿ ಸಿಗುತ್ತವೆ.

ರಕ್ತದಾನದಿಂದಾಗುವ ಲಾಭUಳು: ಹಳೆಯ ರಕ್ತ ಹೊರ ಹೋಗುವದರಿಂದ ದೇಹದಲ್ಲಿ ಹೊಸತನದ ಅನುಭವ, ಜ್ಞಾಪಕ ಶಕ್ತ್ತಿ ಹೆಚ್ಚಿಸುತ್ತದೆ, ಅನುವಂಶಿಕವಾಗಿ ಬಂದಂತಹ ಖಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ನರರೋಗ ಇತ್ಯಾದಿ ಖಾಯಿಗಳಿಂದ ಶೇ. 80 ರಷ್ಟು ಗುಣಮುಖವಾಗಬಹುದು. ದೃಷ್ಟಿದೋಷಗಳ ನಿವಾರಣೆ ಹೀಗೆ ಅನೇಕ ಸಮಸ್ಯೆಗಳಿಗೆ ಔಷಧವಿಲ್ಲದೇ ಪರಿಹಾರ ಕಂಡುಕೊಳ್ಳಬಹುದಾಗಿದೆ.

  • ಯಾರು ರಕ್ತ ದಾನ ಮಾಡಬಹುದು.

1) 18 ವರ್ಷ ವಯಸ್ಸು ಮೇಲ್ಪಟ್ಟ ಹೆಣ್ಣುಗಂಡೆಂಬ ಭೇದವಿಲ್ಲದೇ ಆರೋಗ್ಯವಂತ ಎಲ್ಲರೂ ದಾನ ಮಾಡಬಹುದು.

2) 45 ಕೆಜಿ ಗಿಂತ ಅಧಿಕ ತೂಕ ಹೊಂದಿದವರು. ಸ್ತ್ರೀ ಹಾಗೂ ಪುರುಷರಲ್ಲಿ 12.5 ಗ್ರಾಂ ಗಿಂತ ಅಧಿಕ ರಕ್ತ ಹೊಂದಿದವರು.

4) ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಹೆಚ್ ಐ ವಿ / ಏಡ್ಸ, ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ಗಳಿಂದ ಬಳಲುತ್ತಿರಬಾರದು. 1 ವರ್ಷದ ಅವದಿ ಒಳಗೆ ಕಾಮಾಲೆ ಚಿಕೆತ್ಸೆಹೂಂದಿ ಗುಣಮುಖರಾಗಿದ್ದರು ರಕ್ತದಾನ ಮಾಡುವಂತಿಲ್ಲಾ.

7) ಯಾವುದೇ ತರಹದ ಚುಚ್ಚುಮದ್ದು ಹಾಕಿಸಿಕೊಂಡಿರಬಾರದು. ಶಸ್ತ್ರಚಿಕಿತ್ಸೆ ಒಳಗಾದವರು ರಕ್ತದಾನಮಾಡುವಂತಿಲ್ಲ.

9) ಮಧ್ಯಪಾನ ಮತ್ತು ಸಿUರೇಟ ಸೇವಿಸಿರಬಾರದು.

10) ಪ್ರತಿ ಸಲ ರಕ್ತದಾನ ಮಾಡುವಾಗ ಕನಿಷ್ಟ 3 ತಿಂಗಳುಗಳ ಅಂತರವನ್ನು ಪಾಲಿಸಬೇಕು.

  • ರಕ್ತವನ್ನು ಯಾರಿಗೆ ಉಪಯೋಗಿಸಲಾಗುತ್ತದೆ.

1) ರಕ್ತಹೀನತೆ ಹಾಗೂ ಹಿಮೋಪಿಲಿಯಾಯಿಂದ ಬಳಲುತ್ತಿರುವವರಿಗೆ.

3) ಅಪಘಾತದಲ್ಲಿ ತೀವ್ರ ರಕ್ತಸ್ರಾವ, ಡಾಯಲೆಸಿಸ್ (ರಕ್ತಶುದ್ದೀಕರಣ) ಹೃದಯ, ಮುತ್ರಪಿಂಡ ಶಸ್ತ್ರಚಿಕಿತ್ಸೆ ಅಥವಾ ಇನ್ನಿತರೆ ಶಸ್ತ್ರಚಿಕಿತ್ಸೆ ನೆರವೇರಿಸುವಾಗ.

5) ಚಿಕ್ಕ ಮಕ್ಕಳ ಸಂಪೂರ್ಣ ರಕ್ತ ವರ್ಗಾವಣೆ ಮಾಡುವಾಗ.

7) ರಕ್ತದ ವಿಭಾಗೀಕರಣದಿಂದ ಔಷಧ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ..

ದೇಶದಲ್ಲಿ ಶೇ 50 ರಿಂದ 60 ರಷ್ಟು ಮಾತ್ರ ರಕ್ತದಾನ ಮಾಡುತ್ತಾರೆ. ರಕ್ತ ದಾನದಿಂದ ರಕ್ತ ತೆಗೆದುಕೋಳ್ಳುವವರು ಮತ್ತು ದಾನ ಮಾಡುವವರಿಗೂ ತುಂಬಾ ಲಾಭವಾಗುತ್ತದೆ. ರಕ್ತ ದಾನದÀ ಅರಿವನ್ನು ನಾವು ಟಿ.ವಿ, ರೇಡಿಯೂ, ಪತ್ರಿಕೆ ಮತ್ತು ರಕ್ತದಾನ ಶಿಬಿರಗಳಿಂದ ಮೂಡಿಸಲು ಪ್ರಯತ್ನಿಸಿದರೂ ನಾವು ಸ್ವಯಂ ಜಾಗೃತರಾದಾಗ ಮಾತ್ರ ಇದು ಸಾದ್ಯ.

ಅರುಣ ಈ ನಾಗಣ್ಣವರ

ಜನಸಂಪರ್ಕ ಅಧಿಕಾರಿ

ಕೆ ಎಲ್ ಇ ಶತಮಾನೂತ್ಸವ ಚಾರಿಟೆಬಲ್ ಆಸ್ಪತ್ರೆ

ಯಳ್ಳೂರ ರೋಡ್

ಬೆಳಗಾವಿ.

ಪೂ; 9964288765.

Popular Doctors

Related Articles